ವಚನ ವಿಚಾರ – ಜ್ಞಾನ-ಕ್ರಿಯೆ

ವಚನ ವಿಚಾರ – ಜ್ಞಾನ-ಕ್ರಿಯೆ

ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ
ತಾಗುವ ಮೊನೆಗಾಧಾರವಾಗಿ
ದೂರ ಎಯಿದುವುದಕ್ಕೆ ಸಾಗಿಸುವ ಗುಣ ತಾನಾಗಿ
ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ
ಅರಿವು ಕುರುಹು ಎರಡೂ ಬೇಕೆಂದನಂಬಿಗ ಚೌಡಯ್ಯ

[ಅಂಬಿನ-ಬಾಣದ, ಹಿಳಿಕಿನಲ್ಲಿ-ಹಿಂಬದಿಯಲ್ಲಿ, ವಿಹಂಗನ ಹಕ್ಕಿಯ, ಕ್ರೀ-ಕ್ರಿಯೆ, ಕಾಬನ್ನಕ್ಕ-ಕಾಣುವವರೆಗೆ]

ಅಂಬಿಗರ ಚೌಡಯ್ಯನ ವಚನ, ಜ್ಞಾನ ಮತ್ತು ಕ್ರಿಯೆಗಳಿಗೆ ಇರುವ ಸಂಬಂಧವನ್ನು ಈ ವಚನ ವಿವರಿಸುತ್ತದೆ.

ಇಲ್ಲಿ ಒಂದು ರೂಪಕವಿದೆ. ಅದು ಬಾಣದ ರೂಪಕ. ಬಾಣದ ಹಿಳಿಕಿನಲ್ಲಿ ಹಕ್ಕಿಯ ಗರಿಯನ್ನು ಕಟ್ಟಿರುವುದುಂಟು. ಆ ಗರಿಯ ಕಾರ್‍ಯ ಏನೆಂದರೆ ಗುರಿಯನ್ನು ಮುಟ್ಟುವ ಮೊನೆಗೆ ಸಹಾಯಮಾಡುವುದು. ಹಿಂಬದಿಯ ಗರಿಯ ಬೆಂಬಲ, ಸಮತೋಲ ಇಲ್ಲದಿದ್ದರೆ ಬಾಣವು ದೂರ ಹೋಗದು.

ಹಾಗೆಯೇ ಕ್ರಿಯೆ ಎಂಬುದು ಬಾಣ, ಅರಿವು ಅನ್ನುವುದು ಬಾಣದ ಹಿಳಿಕಿನಲ್ಲಿರುವ ಗರಿ ಎಂದು ಚೌಡಯ್ಯ ಹೇಳುತ್ತಾನೆ. ಈ ಅರಿವು ಮತ್ತು ಕ್ರಿಯೆಯ ವ್ಯತ್ಯಾಸವನ್ನು, ಸಂಬಂಧವನ್ನು ಅರಿಯುವವರೆಗೆ ಅರಿವು, ಕುರುಹು (ಸಂಕೇತ, ಲಾಂಛನ) ಎಲ್ಲವೂ ಬೇಕು ಅನ್ನುತ್ತಾನೆ.

ಆಧುನಿಕ ಕಾಲದಲ್ಲಿ ಜ್ಞಾನ (ನಾಲೆಜ್) ಮತ್ತು ಕ್ರಿಯೆ (ಆಕ್ಷನ್) ಕುರಿತು, ಪ್ರಾಕ್ಟಿಸ್‌ ಮತ್ತು ಥಿಯರಿ ಕುರಿತು ಅನೇಕ ಚರ್ಚೆಗಳು ನಡೆದಿವೆ. ಆಧುನಿಕ ಪೂರ್‍ವ ಕಾಲದಲ್ಲಿ ಜ್ಞಾನ ಮತ್ತು ಕ್ರಿಯೆಗಳ ಸಂಬಂಧ ಕುರಿತು ನಡೆದ ಚರ್ಚೆಯ ನಿದರ್‍ಶನವಾಗಿ ಈ ವಚನ ಕಾಣುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸರಸ್ವತಿಗೆ
Next post ಉಸಾಬರಿ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys